ಶಿರೂರು:ಶ್ರೀ ಸದ್ಗುರು ಶಾಂತಾನಂದ ಆಶ್ರಮ ಪೇಟೆ ಶಿರೂರು ಇದರ ಶ್ರೀ ಸದ್ಗುರು ಶಾಂತಾನಂದ ಸ್ವಾಮೀಜಿಯವರ ಪುನಃ ಪ್ರತಿಷ್ಠೆ ಕಾರ್ಯಕ್ರಮ ಜ.31 ರಂದು ನಡೆಯಲಿದೆ.ಬೆಳಿಗ್ಗೆ ಪ್ರಾರ್ಥನೆ,ನಿತ್ಯಾರ್ಚನೆ,ನಿತ್ಯಪೂಜೆ ಹಾಗೂ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ವರ್ಷಂಪ್ರತಿ ನಡೆಯುವ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಫೆ.02 ರಂದು ಮೊದಲ್ಗೊಂಡು ಫೆ.09 ರಂದು ರವಿವಾರ ಮಂಗಲಗೊಳ್ಳಲಿದೆ ಎಂದು ಅಶ್ರಮದ ಟ್ರಸ್ಟಿ ಎಸ್.ಪ್ರಭಾಕರ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
