ಶಿರೂರು; ಶಿರೂರುಗ್ರಾಮದ ಕೆಳಪೇಟೆಯಲ್ಲಿರುವ ಹೊನ್ನ ಮಾಸ್ತಿ ಎಂಬ ಕಟ್ಟಡದಲ್ಲಿರುವ ಶ್ರೀ ಶಾಂತದುರ್ಗಾ ಚಾಮುಂಡೇಶ್ವರಿ ಜ್ಯುವೆಲ್ಲರಿ ವರ್ಕ್ಸ ಅಂಗಡಿಗೆ ಬೀಗ ಮುರಿದು ಕಳ್ಳತನ ನಡೆಸಿದ್ದಾರೆ. ದಿನಾಂಕ 22-04–2024 ರಂದು ಬೆಳಿಗ್ಗೆ ಅಂಗಡಿಗೆ ಬಂದು ವ್ಯವಹಾರ ನಡೆಸಿ ರಾತ್ರಿ 8:00 ಗಂಟೆಗೆ ಅಂಗಡಿಗೆ ಬಾಗಿಲು ಹಾಕಿ ಮನೆಗೆ ಹೋಗಿರುತ್ತಾರೆ. ಬೆಳಿಗ್ಗೆ ಅಂಗಡಿಯ ಕಟ್ಟಡದ ಮಾಲೀಕರು ನೋಡಿದಾಗ ಕಳ್ಳತನ ನಡೆಸಿರುವುದು ಕಂಡು ಬಂದಿದೆ. ಯಾರೋ ಕಳ್ಳರು ಶಟರ್ ಬಾಗಿಲನ್ನು ಮುರಿದು ಅಂಗಡಿಯ ಒಳ ಪ್ರವೇಶಿಸಿ ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿ ಇಟ್ಟಿದ್ದ ನಗದು ರೂ 40,000/-, ಅಂಗಡಿಯಲ್ಲಿಟ್ಟಿದ್ದ ಹಳೇಯ ಬೆಳ್ಳಿ ಜ್ಯುವೆಲ್ಲರಿ ಸಾಮಾಗ್ರಿಗಳು ಅಂದಾಜು ಮೌಲ್ಯ ರೂ 60,000/- ಮತ್ತು 6 ಗ್ರಾಂ ತೂಕದ ಚಿನ್ನದ ಚೂರುಗಳು ಮೌಲ್ಯ ರೂ.40,000/- ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸ್ವೊತ್ತುಗಳ ಒಟ್ಟು ಮೌಲ್ಯ ರೂ 1,40,000/- ಆಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

16 − ten =