ಬೈಂದೂರು: ಬೈಂದೂರು ತಾಲೂಕು ಆಡಳಿತ ಕಛೇರಿಯಲ್ಲಿ ಕಳೆದ ಐದು ವರ್ಷಗಳಿಂದ ಭೂ ಮಾಪಕರಾಗಿ ಸೇವೆ ಸಲ್ಲಿಸಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಆಡಳಿತ ಕಛೇರಿಗೆ ವರ್ಗಾವಣೆಗೊಂಡ ಮಾರುತಿ ನಾಯ್ಕ ಹಾಗೂ ಮಂಜುಳಾ ನಾಯ್ಕ ಇವರ ಬೀಳ್ಕೋಡುಗೆ ಸಮಾರಂಭ ಬೈಂದೂರು ತಾಲೂಕು ಆಡಳಿತ ಕಛೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ಶ್ರೀಕಾಂತ ಹೆಗ್ಡೆ,ಉಡುಪಿ ಡಿ.ಡಿ.ಎಲ್.ಆರ್ ರವೀಂದ್ರ,ಬೈಂದೂರು ಎ.ಡಿ.ಎಲ್.ಆರ್ ಪುಷ್ಪರಾಜ್,ಉಪತಹಶೀಲ್ದಾರ ಭೀಮಪ್ಪ ಬಿಲ್ಲಾರ್,ಕಂದಾಯ ಇಲಾಖೆಯ ಗಿರಿಜಾ ಮೊಗೇರ್ ಹಾಗೂ ಸಿಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published.

four + 1 =