ಬೈಂದೂರು: ಜೆಸಿಐ ಶಂಕರನಾರಾಯಣ ಆತಿಥ್ಯದಲ್ಲಿ ಹಾಲಾಡಿಯಲ್ಲಿ ನಡೆದ ಜೆಸಿಐ ಭಾರತ ವಲಯ 15ರ ಅಭಿವೃದ್ದಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಉಪ್ಪುಂದ ಸತ್ಯನಾರಾಯಣ ಇಂಡಸ್ಟ್ರೀಸ್ ಮಾಲಕ ಗಣೇಶ ಗಾಣಿಗ ಉಪ್ಪುಂದ ಇವರಿಗೆ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಉಪ್ಪುಂದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ,ವಲಯ್ಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಬಿಸಿನೆಸ್ ವಿಭಾಗದ ನಿರ್ದೇಶಕ ನಾಗರಾಜ್ ಪೂಜಾರಿ,ನಿಕಟ ಪೂರ್ವ ಅಧ್ಯಕ್ಷ ರಾಯನ್ ಉದಯ್ ಕ್ರಾಸಾ, ಕಾರ್ಯಕ್ರಮ ವಿಭಾಗದ ನಿರ್ದೇಶಕ ಅಕ್ಷತಾ ಗಿರೀಶ್,ಉಪಾಧ್ಯಕ್ಷ ಮಂಜುನಾಥ್ ದೇವಾಡಿಗ,ಪೂರ್ವ ಅಧ್ಯಕ್ಷ ಪ್ರಕಾಶ್ ಭಟ್,ಮಂಗೇಶ್ ಶಾನುಭಾಗ್,ಸುಬ್ರಮಣ್ಯ ಜಿ.ಉಪ್ಪುಂದ,ಪುರಂದರ ಖಾರ್ವಿ,ಹಿರಿಯ ಸದಸ್ಯಗುರುರಾಜ್ ಹೆಬ್ಬಾರ್,ಶಿವಾನಂದ ಗಾಣಿಗ,ಜೇಸಿರೇಟ್ ಅಧ್ಯಕ್ಷೆ ರೇಖಾ,ಜೆಜೆಸಿ ಅಧ್ಯಕ್ಷೆ ನಿಶಾ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.