ಶಿರೂರು; ಕಳೆದ ಒಂದು ವರ್ಷಗಳಿಂದ ಬ್ಯಾಂಕ್ ಆಫ್ ಬರೋಡಾ ಶಿರೂರು ಶಾಖೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಆಂದ್ರಪ್ರದೇಶ ಶಾಖೆಗೆ ವರ್ಗಾವಣೆಗೊಂಡ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಆರ್.ಎಸ್.ವಿಜಯ ಕುಮಾರ್ ಹಾಗೂ ಅಸಿಸ್ಟೇಂಟ್ ಬ್ರಾಂಚ್ ಮ್ಯಾನೇಜರ್ ಮನೋಹರ ಪೆಡನ್ನೇಕರ್ ಬೀಳ್ಕೋಡುಗೆ ಸಮಾರಂಭ ಬ್ಯಾಂಕ್ ಆಫ್ ಬರೋಡಾ ಶಿರೂರು ಶಾಖೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಿವೃತ್ತ ವಿಜಯ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಸತೀಶ ಕುಮಾರ್ ಶೆಟ್ಟಿ,ಶಾಖಾ ಸಿಬಂದಿಗಳಾದ ಮೆಹಬೂಬ್ ಭಾಷಾ,ಬಾಬು ಬಿಲ್ಲವ,ಅರುಣ್ ಕುಮಾರ್ ಶೆಟ್ಟಿ,ಮುಕುಂದ ನಾಯ್ಕ,ಜಗದೀಶ ಬಿಲ್ಲವ,ಕಟ್ಟಡದ ಮಾಲಕರಾದ ಸುಷ್ಮಾ ಪ್ರಭು, ಸರಸ್ವತಿ ಹಾಗೂ ಗ್ರಾಹಕರು ಹಾಜರಿದ್ದರು.
