ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ಉತ್ಸವ ತೆರಾಲಿ ಹಬ್ಬವು ಸಂಭ್ರಮ ಸಡಗರದಿಂದ ನಡೆಯಿತು. ಕುಂದಾಪುರ ವಲಯದ ಮುಖ್ಯ ಧರ್ಮಗುರು ರೆ. ಫಾ. ಪಾವ್ಲ್ ರೇಗೋ ಬಲಿಪೂಜೆಯ ಪ್ರಧಾನ ಗುರುಗಳಾಗಿ ಬಲಿಪೂಜೆ ನೆರವೇರಿಸಿದರು.
ಹಿಂದಿನ ದಿನದ ಹಬ್ಬದ ಧಾರ್ಮಿಕ ವಿಧಿ ವಿಧಾನಗಳನ್ನು ಜೆಜ್ವಿತ್ ಧರ್ಮಗುರು ರೆ. ಫಾ. ವಿಲ್ಸನ್ ಸಲ್ದಾನ, ಕೋಂಪ್ರಿ ಹಬ್ಬವನ್ನು ಬಸ್ರೂರಿನ ರೆ. ಫಾ. ಮೆಲ್ವಿಲ್ ರೋಯ್ ಲೋಬೋರವರು ನೆರವೆರಸಿದರು.
ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಹಸ್ರಾರು ಧರ್ಮಗುರುಗಳು, ಬೈಂದೂರಿನ ಸಹಾಯಕ ಧರ್ಮಗುರು ಜೊಸ್ವಿನ್ ಸಿಕ್ವೇರಾ,ಪ್ರಧಾನ ಪೋಷಕ ಸ್ಯಾಮುಯಲ್ ರೆಬೆರೋ, ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ಸ್ಟೇಪನ್ ಡಾಯಸ್, ಕಾರ್ಯದರ್ಶಿ ವೀಣಾ ಫೆನಾಂಡಿಸ್, ಆಯೋಗದ ಸಂಯೋಜಕಿ ಅನಿತಾ ನಜ್ರೆತ್ ಉಪಸ್ಥಿತರಿದ್ದರು.


ಚರ್ಚಿನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಕುವೆಲ್ಲೊರವರು ಚರ್ಚಿನ ಮಹೋತ್ಸವಕ್ಕೆ ಬೆಂಬಲ ನೀಡಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.ಈ ಸಂದರ್ಭದಲ್ಲಿ ದಾನಿಗಳಿಗೆ ಹಾಗೂ ಸೆವಾಕರ್ತರಿಗೆ ಗೌರವಾರ್ಥಕವಾಗಿ ಮೇಣದ ಬತ್ತಿ ನೀಡಿ ಗೌರವಿಸಲಾಯಿತು.