ಬೈಂದೂರು: ಬೈಂದೂರು ವ್ರತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಮಾರ್ಗದರ್ಶನದಲ್ಲಿ ದ್ವಿಚಕ್ರ ವಾಹನದಲ್ಲಿ 20 ಕೆ.ಜಿ ಜಿಂಕೆ ಮಾಂಸ ಸಾಗಿಸುತಿದ್ದ ಆರೋಪಿಗಳನ್ನು ಬೈಂದೂರು ಸಮೀಪದ ಒತ್ತಿನೆಣೆ ಬಳಿ ವಶಕ್ಕೆ ಪಡೆದಿದ್ದಾರೆ.ಆರೋಪಿಗಳಿಂದ ಗೊರಸು ಸಮೇತ ಇರುವ ನಾಲ್ಕು ಕಾಲು ಹಾಗೂ ಇಪ್ಪತ್ತು ಕೆಜಿ ಮಾಂಸ ವಶಪಡಿಸಿಕೊಳ್ಳಲಾಗಿದೆ.ಮೊಹಮ್ಮದ್ ನಾಸೀರ್,ಅಬ್ದುಲ್ ಆಲಿಮ್ ಬಂದಿತ ಆರೋಪಿಗಳಾಗಿದ್ದಾರೆ.ಕಾರ್ಯಾಚರಣೆಯಲ್ಲಿ ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ,ಬೈಂದೂರು ವ್ರತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ,ಠಾಣಾಧಿಕಾರಿ ನಿರಂಜನ ಗೌಡ,ಠಾಣಾ ಸಿಬಂದಿಗಳಾದ ಮೋಹನ್ ಪೂಜಾರಿ ಶಿರೂರು,ನಾಗೇಂದ್ರ ಬೈಂದೂರು,ಚಾಲಕ ಚಂದ್ರಶೇಖರ ಪೂಜಾರಿ,ಅಶೋಕ ರಾಥೋಡ್ ಭಾಗವಹಿಸಿದ್ದರು.ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

20 − four =