ಶಿರೂರು: ಕೈರಂಪಣಿ ಮೀನುಗಾರಿಕೆಗೆ ತೆರಳಿ ಸಮುದ್ರ ಪಾಲಾಗಿದ್ದ ಗಂಗೊಳ್ಳಿ ಮುಸಾಭ್(22) ಹಾಗೂ ನಝಾನ್(24)ಶವ ಸೋಮವಾರ ಮುಂಜಾನೆ ಅಳ್ವೆಗದ್ದೆ ಕಡಲ ತೀರದಲ್ಲಿ ಪತ್ತೆಯಾಗಿದೆ.ಭಾನುವಾರ ಸಂಜೆ ಕೈರಂಪಣಿ ಮೀನುಗಾರಿಕೆಗೆ ತೆರಳಿದಾಗ ಅಲೆಯ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದರು ಭಾನುವಾರ ಸಂಜೆಯಿಂದ ಶೋಧಕಾರ್ಯ ನಡೆಸಲಾಗಿತ್ತು.ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಂದೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು.ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಮುಸಾಭ್ ಮತ್ತು ಬಾವು ನಝಾನ್ ಇಬ್ಬರು ಅವಿವಾಹಿತರಾಗಿದ್ದರು.ಮುಸಾಭ್ ಅವರು ಹೆತ್ತವರು,ಮೂವರು ಅಕ್ಕಂದಿರು ಮತ್ತು ಇಬ್ಬರು ತಮ್ಮಂದಿರನ್ನು ಅಗಲಿದ್ದಾರೆ.ಅಕ್ಕಂದಿರಿಗೆ ವಿವಾಹವಾಗಿದೆ.ಮುಸಾಭ್ ಕಳೆದ ವಾರವಷ್ಟೆ ಭಟ್ಕಳದ ಅಂಜುಮಾನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು.ನಝಾನ್ ಅವರು ಹೆತ್ತವರು,ತಮ್ಮ ಮತ್ತು ತಂಗಿಯನ್ನು ಅಗಲಿದ್ದಾರೆ.

ಹದಿನೈದು ದಿನಗಳ ಹಿಂದೆ ದುಬೈಯಿಂದ ಊರಿಗೆ ಬಂದಿದ್ದರು: ಮೃತ ನಝಾನ್ ದುಬೈಯಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಉದ್ಯೋಗದಲಿದ್ದು ಹದಿನೈದು ದಿನದ ಹಿಂದೆ ರಜೆಗಾಗಿ ಊರಿಗೆ ಬಂದಿದ್ದರು.ರವಿವಾರ ಸಂಭವಿಸಿದ ಈ ಘಟನೆ ಶಿರೂರು ಭಾಗದ ಮೀನುಗಾರರಿಗೆ ಆಘಾತ ನೀಡಿದೆ.

 

 

Leave a Reply

Your email address will not be published.

five × two =