ಬೈಂದೂರು: ಬೈಂದೂರು ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ 766 ಸಿ ತಗ್ಗರ್ಸೆಯ ಕೊಲ್ಲೂರು ಮಾರ್ಗದಲ್ಲಿ ಶ್ರೀ ಲಕ್ಷ್ಮೀ ಸಾಯಿರಾಮ್ ಫ್ಯೂಯಲ್ಸ್ ಸರ್ವೀಸ್ ಶುಕ್ರವಾರ ಶುಭಾರಂಭಗೊಂಡಿತು.ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಶ್ರೀ ಲಕ್ಷ್ಮೀ ಸಾಯಿರಾಮ್ ಫ್ಯೂಯಲ್ಸ್ ಸರ್ವೀಸ್ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ,ಜಿ.ಪಂ ಮಾಜಿ ಸದಸ್ಯ ಬಾಬು ಶೆಟ್ಟಿ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ,ಬೈಂದೂರು ತಹಶೀಲ್ದಾರ ಶ್ರೀಕಾಂತ ಹೆಗಡೆ,ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್ ಕುಮಾರ್,ಪಿ.ಡಬ್ಲೂ.ಡಿ ಕಂಟ್ರ್ಯಾಕ್ಟರ್ ಪ್ರಭಾಕರ ಶೆಟ್ಟಿ,ದೃತಿ ಸರ್ಜಿಕಲ್ ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಕೆನರಾ ಬ್ಯಾಂಕ್ ಸಂಸ್ಥೆಯ ರತ್ನಾಕರ ಗಾಣಿಗ,ದಿವಾಕರ ಶೆಟ್ಟಿ ನೆಲ್ಯಾಡಿ,ಸುಧಾಕರ ಶೆಟ್ಟಿ ನೆಲ್ಯಾಡಿ,ಸುಶೀಲಾ ಶೆಟ್ಟಿ ಲಕ್ಷ್ಮೀಕೃಪಾ ನೆಲ್ಯಾಡಿ,ನಿವೃತ್ತ ಅದ್ಯಾಪಕ ಸುರೇಂದ್ರ ಹೆಗ್ಡೆ,ವಿನುತ್ ಹೆಗ್ಡೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗಣೇಶ ಆಚಾರ್ಯ ರವರನ್ನು ಸಮ್ಮಾನಿಸಲಾಯಿತು.ಸಂದೀಪ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಪೆಟ್ರೋಲ್ ಬಂಕ್‌ನ ಮಾಲಕಿ ಮೂಕಾಂಬಿಕಾ ಮಂಜುನಾಥ ಶೆಟ್ಟಿ ವಂದಿಸಿದರು.

 

 

 

 

Leave a Reply

Your email address will not be published. Required fields are marked *

6 + 20 =