ಬೈಂದೂರು: ಬೈಂದೂರು ಬಾರ್ ಅಸೋಸಿಯೇಷನ್ (ರಿ) ಇದರ ನೂತನ ಪಧಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಬೈಂದೂರಿನಲ್ಲಿ ನಡೆಯಿತು. 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಬೈಂದೂರಿನ ವಕೀಲರಾದ ಪ್ರಶಾಂತ್ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು. ನೂತನ ಕಾರ್ಯದರ್ಶಿಯಾಗಿ ಲಿಂಗಪ್ಪ ಆರ್ ಮೇಸ್ತ,ಖಜಾಂಚಿಯಾಗಿ ಪಿಂಕಿ ಕಾರ್ವಲ್ಲೋ, ಉಪಾಧ್ಯಕ್ಷರಾಗಿ ಚಿಕ್ಕಯ್ಯ ನಾರಾಯಣ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಮೇಸ್ತ, ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಶ್ರೀಧರ್ ಜಿ, ಅಖಿಲ ರಾಣಿ, ಕೀರ್ತನ, ಹೇಮಲತಾ ಆಯ್ಕೆಯಾದರು.
ಮಾಜಿ ಅಧ್ಯಕ್ಷರಾದ ಮೋಬಿ ಪಿ.ಸಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.