ಶಿರೂರು; ರಾಜ್ಯ ಪೊಲೀಸ್ ಇಲಾಖೆಯ ವಿನೂತನ ಕಾರ್ಯಕ್ರಮವಾದ ಮನೆ ಮನೆಗೆ ಪೊಲೀಸ್ -2025 ಕಾರ್ಯಕ್ರಮ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದಲ್ಲಿ ನಡೆಯಿತು.
ಬೈಂದೂರು ಆರಕ್ಷಕ ಇಲಾಖೆಯ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಉಪಾಧ್ಯಕ್ಷ ಕಾಪ್ಸಿ ನೂರ್ಮಹ್ಮದ್,ಗ್ರಾ.ಪಂ ಸದಸ್ಯರು,ಸಿಬ್ಬಂದಿಗಳಾದ ಚಿದಾನಂದ,ಮಾಳಪ್ಪ ದೇಸಾಯಿ ಹಾಜರಿದ್ದರು.