ಬೈಂದೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಯ) ವತ್ತಿನೆಣೆ ಬೈಂದೂರು ಇದರ ನೂತನ ಶಿಲಾಮಯ ಗರ್ಭಗುಡಿ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಗುರುವಾರ ನಡೆಯಿತು.ಬೈಂದೂರು ವತ್ತಿನೆಣೆ ಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ನೂತನ ಶಿಲಾಮಯ ಗರ್ಭಗುಡಿ ಮಾಡಲು ಬಾಲಾಲಯದಲ್ಲಿ ಶ್ರೀ ಗುರುಗಳ ಬೃಂದಾವನ ಬಾಲಾಲಯದಲ್ಲಿ ಧಾರ್ಮಿಕ ವಿಧಿ ವಿಧಾನ ಸೇರಿದಂತೆ ಪ್ರತಿಷ್ಠಾಪನೆಯನ್ನು ವೇದಮೂರ್ತಿ ಕೆಂಜಾರು ಶ್ರೀಧರ್ ತಂತ್ರಿಗಳ ನೇತೃತ್ವದಲ್ಲಿ ಮತ್ತು ಅರ್ಚಕರಾದ ಸುಬ್ರಹ್ಮಣ್ಯ ನಾವುಡರ ಮುಂದಾಳತ್ವದಲ್ಲಿ  ನಡೆಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ,ಮಠದ ಟ್ರಸ್ಟಿಗಳಾದ ಎಸ್.ರಾಜು ಪೂಜಾರಿ, ದಿನಕರ್ ಶೆಟ್ಟಿ, ನಾಗರಾಜ್ ದೇವಾಡಿಗ, ರವೀಂದ್ರ ಶಾನುಭಾಗ್, ಮಂಜುನಾಥ ಸೆಳ್ಳೆ ಕುಳ್ಳಿ, ದಿನೇಶ್ ಕೆ, ಮಂಜುನಾಥ್ ಶೆಟ್ಟಿ,ಅರ್ಚಕರಾದ ಮುರಳಿಧರ್ ನಾವುಡ ಹಾಜರಿದ್ದರು.

 

Leave a Reply

Your email address will not be published. Required fields are marked *

2 × 4 =

You missed