ಶಿರೂರು: ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ವತಿಯಿಂದ ಸುಮಾರು ಮೂರು ಕೋಟಿ ವೆಚ್ಚ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ರವಿವಾರ ನಡೆಯಿತು.ತಂತ್ರಿಗಳಾದ ವೇ.ಮೂ ರಾಮಚಂದ್ರ ಭಟ್ ಶಿರಾಲಿ ಇವರ ಮಾರ್ಗದರ್ಶನದಲ್ಲಿ  ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು.ಬೆಳಿಗ್ಗೆ ದೇವರ ಸನ್ನಿಧಿಯಲ್ಲಿ ಶಿಲಾನ್ಯಾಸ,ಮುಷ್ಠಿ ಕಾಣಿಕೆ ಸಮರ್ಪಣೆ ಹಾಗೂ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣಪತಿ ಎಸ್.ಮೊಗೇರ್,ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಡಾ.ಜಿ.ಶಂಕರ ಸಹೋದರ ಶಿವಣ್ಣ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮ ಎನ್.ಮೊಗೇರ್ ಅಳ್ವೆಗದ್ದೆ,ಮಾಜಿ ಅಧ್ಯಕ್ಷರಾದ ಅಕ್ಷಯ ನಾರಾಯಣ ಶ್ರೀನಿವಾಸ,ತಿಮ್ಮಪ್ಪ ಎನ್.ಮೊಗೇರ ಅಳ್ವೆಗದ್ದೆ,ಮೊಗವೀರ ಮಹಾಜನ ಸಂಘದ ಬಗ್ವಾಡಿ ಹೋಬಳಿ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ,ಗೌರವ ಸಲಹೆಗಾರ ಎಂ.ಎಂ.ಸುವರ್ಣ,ನಾರಾಯಣ ಚಂದನ್,ಗೌರವಾಧ್ಯಕ್ಷ ನಾರಾಯಣ ಟಿ.ಅಳ್ವೆಗದ್ದೆ,ಗ್ರಾ.ಪಂ ಸದಸ್ಯ ನಾಗೇಶ್ ಮೊಗೇರ್ ಅಳ್ವೆಗದ್ದೆ, ಬಾಬು ಮೊಗೇರ್ ಅಳ್ವೆಗದ್ದೆ,ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು,ಜೀರ್ಣೋದ್ದಾರ ಸಮಿತಿ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.

News/pic: Giri Shiruru

Leave a Reply

Your email address will not be published.

1 × five =