ಬೈಂದೂರು; ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ  ಗೋವಿಂದ ಬಾಬು ಪೂಜಾರಿ ಯವರಿಗೆ  ಬಿಜೆಪಿ ಟಿಕೆಟ್ ಕೊಡದೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ಗೋವಿಂದ ಬಾಬು ಪೂಜಾರಿ ಯವರ  ಅಭಿಮಾನಿಗಳು ಹಾಗೂ ಬೆಂಬಲಿಗರಿಂದ ಶನಿವಾರ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಬಿಜೂರಿನಲ್ಲಿ ಸಭೆ ನಡೆಸಿ ಬಿಜೆಪಿ ಟಿಕೆಟ್ ನೀಡದಿದ್ದಕ್ಕೆ  ಹೈಕಮಾಂಡ್ ಮತ್ತು ಸ್ಥಳೀಯ ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ಹೊರ ಹೊರ ಹಾಕಿದರು.ಟಿಕೆಟ್ ನೀಡದಿರುವ ಬಗ್ಗೆ ಬೆಳಿಗ್ಗೆ  ಗೋವಿಂದ ಬಾಬು ಪೂಜಾರಿ ಯವರು ಬಿಜೂರು ಕಛೇರಿ ಮುಂದೆ ಬಿಜೆಪಿ ಹಾಗೂ ಅಭಿಮಾನಿ ಬಳಗದವರು  ಕಾರ್ಯಕರ್ತರು ಸಭೆ ನಡೆಸಿ ಗೋವಿಂದ ಬಾಬು ಪೂಜಾರಿಯವರು ಪ್ರಸ್ತುತ ವಾತಾವರಣದ ಬಗ್ಗೆ  ಮುಂದಿನ ನಡೆಯ ಬಗ್ಗೆ  ಸಭೆ  ಮಾಡಿ  ಇನ್ನು ಮೂರು ನಾಲ್ಕು ದಿನಗಳ ಬಳಿಕ ಸ್ಪಷ್ಟ ನಿಲುವಿನ ಬಗ್ಗೆ ನಿರ್ಧಾರ ಮಾಡುವುದಾಗಿ ಹೇಳಿದರು.

ಬಳಿಕ ಬೈಂದೂರು ಕ್ಷೇತ್ರದ  ಅಭಿಮಾನಿಗಳು ಹಾಗೂ ಬೆಂಬಲಿಗರ ಜೊತೆ ಗೋವಿಂದ ಬಾಬು ಪೂಜಾರಿ  ಮಾತನಾಡಿ ಇನ್ನು ಮೂರು ನಾಲ್ಕು  ದಿನಗಳಲ್ಲಿ ನನ್ನ ನಿರ್ಧಾರ ಹೇಳುತ್ತೇನೆ. ಅಲ್ಲಿಯವರೆಗೆ ನೀವೆಲ್ಲರೂ ನನ್ನ ಜೊತೆ ಇದ್ದು ಸಹಕರಿಸಬೇಕೆಂದು ಅಭಿಮಾನಿಗಳಿಗೆ ವಿನಂತಿಸಿದರು.

Leave a Reply

Your email address will not be published.

13 − three =