ಶಿರೂರು: ಯುವಶಕ್ತಿ ಕರಾವಳಿ ಹಾಗೂ ಅರುಣ್ ಪಬ್ಲಿಸಿಟಿ ಇದರ ಸಂಯುಕ್ತ ಆಶ್ರಯದಲ್ಲಿ  ನಡೆದ ಕರಾವಳಿ ಸಂಭ್ರಮ -2023 ಇದರ ಶಿರೂರು ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಗಾಳಿಪಟ ಸ್ಪರ್ಧೆ ಕರಾವಳಿಯಲ್ಲಿ ನಡೆಯಿತು.ಶಿರೂರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿದರು ಹಾಗೂ ಸಂಜೆ ನಡೆದ ಗಾಳಿಪಟ ಸ್ಪರ್ಧೆಯನ್ನು ಮಾಲಾ ಮಹಾದೇವ ಮೇಸ್ತ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ,ಹಿರಿಯರಾದ ಮಂಜು ಪೂಜಾರಿ,ನಾಣು ಬಿಲ್ಲವ,ಯುವಶಕ್ತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಠ್ಠಲ ಬಿಲ್ಲವ,ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್,ಗ್ರಾ.ಪಂ ಸದಸ್ಯ ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಗೌರವಾಧ್ಯಕ್ಷ ಅಣ್ಣಪ್ಪ ಮೊಗೇರ್,ವಾಸು ಬಿಲ್ಲವ ತೆಂಕಮನೆ,ಮಾಚ ಬಿಲ್ಲವ ಬೆಂಗಳೂರು,ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಬಿಲ್ಲವ,ರಘುರಾಮ ಕೆ.ಪೂಜಾರಿ,ಯಳಜಿತ್ ಶಾಲೆಯ ಮುಖ್ಯ ಶಿಕ್ಷಕಿ ಪದ್ಮಾವತಿ ಮೊಗೇರ್,ರವೀಂದ್ರ ಶೆಟ್ಟಿ ಹೊನ್ಕೇರಿ,ಗಿರಿಜಾ ಮೊಗೇರ್ ಹಾಗೂ ಯುವಶಕ್ತಿ ಮಾಜಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಜರಿದ್ದರು.

ಸರ್ಧೆಯ ಫಲಿತಾಂಶ:

ವಾಲಿಬಾಲ್ ಪಂದ್ಯಾಟದಲ್ಲಿ ಯುನೈಟಡ್ ಶಿರೂರು ಪ್ರಥಮ ಹಾಗೂ ಪ್ರೆಂಡ್ಸ್ ಸ್ಟಾರ್ ಬಿ.ದ್ವಿತೀಯ ಸ್ಥಾನ ಪಡೆದರು.

ಗಾಳಿಪಟ ಜೂನಿಯರ್ ವಿಭಾಗದಲ್ಲಿ ಗಣೇಶ ಪೂಜಾರಿ ಪ್ರಥಮ,ಮಣಿಕಂಠ ದ್ವಿತೀಯ,ಮನೋಹರ ಮೊಗೇರ್ ತೃತೀಯ,ಪ್ರಜ್ವಲ್ ಹಾಗೂ ರಿಯಾ ಸಮಾಧಾನಕರ ಬಹುಮಾನ ಪಡೆದರು.

ಸೀನಿಯರ್ ವಿಭಾಗದಲ್ಲಿ ವಾಸು ಮೊಗವೀರ ದೊಂಬೆ ಪ್ರಥಮ,ಈಶ್ವರ ಪೇಟೆ ದ್ವಿತೀಯ,ಈಶ್ವರ ಖಾರ್ವಿ ದೊಂಬೆ ತೃತೀಯ,ಮನು ಮೊಗವೀರ ಹಾಗೂ ಮೋಹನ್ ಪೂಜಾರಿ ಪಡಿಯಾರಹಿತ್ಲು ಸಮಾಧಾನಕರ ಬಹುಮಾನ ಪಡೆದರು.

ಉಮೇಶ್ ಮೊಗೇರ್ ಸ್ವಾಗತಿಸಿದರು.ದೈಹಿಕ ಶಿಕ್ಷಕ ಗುರುರಾಜ್ ಎಸ್.ಕಾರ್ಯಕ್ರಮ ನಿರ್ವಹಿಸಿದರು.ಮಹೇಶ್ ಮೊಗೇರ್ ವಂದಿಸಿದರು.

pic/Smart studio shiruru

 

 

 

Leave a Reply

Your email address will not be published.

5 × one =