ಶಿರೂರು: ಜೆಸಿಐ ಶಿರೂರು ಘಟಕ ಇದರ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಕಳೆದ ಹಲವು ವರ್ಷಗಳಿಂದ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿರೂರು ಗ್ರಾಮದ ಕರಿಕಟ್ಟೆ ಆರ್ಮಿ ನಿವಾಸಿ ಸುರೇಶ ಮೇಸ್ತ ರವರನ್ನು ಜೆಸಿಐ ಶಿರೂರು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಜೆಸಿಐ ಶಿರೂರು ನ ಅಧ್ಯಕ್ಷ ವಿನೋದ ಮೇಸ್ತ, ಕಾರ್ಯದರ್ಶಿ ಪವನ್ ಪೂಜಾರಿ, ಪೂರ್ವಾಧ್ಯಕ್ಷರರಾದ ನಾಗೇಂದ್ರ ಪ್ರಭು, ಪ್ರಕಾಶ್ ಮಾಕೋಡಿ, ನಾಗೇಶ ಕೆ, ಪಾಂಡುರಂಗ ಅಳ್ವೆಗದ್ದೆ,ಜಯಂತ ಪೂಜಾರಿ ಹಾಗೂ ಸದಸ್ಯರು ಹಾಜರಿದ್ದರು