ಬೈಂದೂರು:ಧಾನ,ಧರ್ಮ,ಸೌಹಾರ್ಧ ಸಮಾನತೆಯ ಹಬ್ಬ ಬಕ್ರೀದ್ ಹಬ್ಬವನ್ನು ಗುರುವಾರ ಬೈಂದೂರು,ನಾಗೂರು,ನಾವುಂದ, ಶಿರೂರು ಹಾಗೂ ಗಂಗೊಳ್ಳಿ ಮುಂತಾದ ಕಡೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಶನಿವಾರ ಮುಂಜಾನೆ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಇಲ್ಲಿನ ಫಾತಿಮಾ ಮಹ್ಮದ್ ಸಯೀದ್ ಮಸೀದಿ ಕೆಸರಕೋಡಿ,ಅಲ್ ಹಸಮೀ ಜಾಮೀಯಾ ಮಸೀದಿ ಹಡವಿನಕೋಣೆ,ಮಸ್ಜಿದ್ ಇ ಖಾದಿಜಾತುಲ್ಲಾ ಕುಬ್ರ ಬೈಂದೂರು ಮಸೀದಿ ಹಾಗೂ ವಿವಿಧ ವಿವಿಧ ಕಡೆಗಳಲ್ಲಿ ಮುಂಜಾನೆ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯದ ಮೂಲಕ ಹಬ್ಬವನ್ನು ಆಚರಿಸಿಕೊಂಡರು.
